ಭಾನುವಾರ, ನವೆಂಬರ್ 27, 2022

ನೊಂದ ಹಸುಳೆಯ ಅಳಲು

 ನೊಂದ ಹಸುಳೆಯ ಅಳಲು

  image courtesy pinterest

ಪಲ್ಲವಿ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಚರಣಂ 1

ಪಾಂಡಿತ್ಯ ನಿಪುಣ ನೀ ಶಿಕ್ಷಕ, ಮೈಮನಮುಟ್ಟುವ ಪಾಠದ ಶಿಕ್ಷಕ

ಬಲು ಸಂಭ್ರಮದಿ ಬಂದಿಹೆ ಶಿಕ್ಷಕ, ವಿಧ್ಯೆ ಪ್ರಧಾಯಿಸೆನಗೆ ಓ ಶಿಕ್ಷಕ

ಚರಣಂ 2

ಜೀವಶಾಸ್ತ್ರವ ಕಲಿಸುವೆನೆಂದೆ, ಅದ ಬಣ್ಣಿಸಲು ಬತ್ತಲೆಯಾಗೆಂದೆ

ಮುಟ್ಟಲು ನೀ ನನ್ನಂಗಾಗಗಳ ಒಂದೊಂದೆ, ಪುಳಕಿತಳಾಗಿ ನಾನಿಂದೆ

ಚರಣ 3

ಇದು ಪಾಠದ ನೆಪದ ಆಟವೋ, ನಿನ್ನ ದಾಹಕೆ ಸಹಪಾಟವೋ

ನನ್ನಂಗದಿ ಆಡಿದ ಚೆಲ್ಲಾಟವೋ, ನರಿಯೊಬ್ಬನ ನನ್ನೊಡನಾಟವೋ

ಚರಣ 4

ಅಭಯ ಹಸ್ತದ ರಕ್ಷೆಯನಿಟ್ಟೆ, ಅಳಿಸಲಾಗದ ಶಿಕ್ಷೆಯ ಕೊಟ್ಟೆ

ಶಿಕ್ಷಕ ನೀನೆಂದು ನಂಬಿದೆ, ಘೋರ ಭಕ್ಷಕನಾಗಿ ನೀನಿಂದು ನಿಂದೆ

ಮಂಗಳ

ಗುರವೇ ದೇವ, ಗುರವೇ ವೈಭವ, ಗುರುಗಳೇ ಜಗದ ಜೀವ,

ಶಿಕ್ಷಕರೇ ನೀವ್ ಭಕ್ಷಕರಾಗದೆ, ನಂಬಿದ ಹಸುಳೆಗೆ ನೀಡುವ ಅಭವ.

 

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ

 

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಉತ್ತರಹಳ್ಳಿ, ಸಂ: 94 48 48 89 10  



ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...