ಭಾನುವಾರ, ಜನವರಿ 11, 2026

ಊರ ಕನ್ನಿಕೆ ಊರ ಬಯಕೆ

 ಊರ ಕನ್ನಿಕೆ ಊರ ಬಯಕೆ

 ಡಾ ಬೆಳವಾಡಿ ಪ್ರಭಾಕರ್ 

ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು

ಸೀರಿಯ ನೆರಿಗೆಯ ಮಿಂಚಿನ ಅಂಚನು ಸೊಂಟದ ಮ್ಯಾಗೆ ಗಂಟನು ಮಾಡಿ ಇಟ್ಟಿತ್ತು

ನೀರಿನ ಮುತ್ತು ಜಾರುತಲಿತ್ತು ಕಂಗಳ ಮ್ಯಾಗಿನ ಅಂಗಳದಾಗ ಆಡತಿತ್ತು ಕಾಡುತಲಿತ್ತು

ಊರಿನ ಕೇರಿಯ ಕೆರೆಯ ಬದಿಯ ಪೊದೆಯ ಮ್ಯಾಗೆ ಹದ್ದು ತುಣುಕುತ ಇಣುಕುತಲಿತ್ತು

ಏನ ಬಿಳುಪು ಏನ ಹೊಳಪು ಹಂಸವೆ ನಾಚಿ ಊರ ಆಚಿ ಕೊರಳನೇ ಹೊರಳಿಸಿ ನಿಂತಿತ್ತು

ಏನ ಅಪ್ಸರೆ ಮಣಿಯೋ ಸೌಂದರ್ಯದ ಗಣಿಯೋ ಕಣ್ಣ ರೆಪ್ಪಿ ಕುಣಿಯದೇ ನಿಂತಂತಾಗಿತ್ತು

ಏನ ನೋಡೆ ನೀಳ ಜಡೆ ಬಾನಿನ ಗೂಡ ಆಡ ಬಯಸಿ ಅರವೀಗೂಡ ಕೆಳಗಾ ಮ್ಯಾಗೆ ಆಗಿತ್ತು

ಏನ ಬಟ್ಟಿ ಏನ ಬುಟ್ಟಿ ಕೆರಿಯ ನೀರು ಸೀರಿಗೆ ಅಂಟಿತ್ತು ನೋಡಿ ನೋಡಿ ನನ್ನ ಕಣ್ಣೇ ಬತ್ತಿತ್ತು

ಅವಳ ಮಾಟವೇ ಹಾಗಿತ್ತು ನೋಟವೇ ಹಾಗಿತ್ತು ತೋಟವೇ ಹಾಗಿತ್ತು ಭಗವಂತನ ಆಟವೇ ಹಾಗಿತ್ತು

ಅವಳ ಚಿತ್ರವ ಬಿಡಿಸಲು ನಿಂತ ಕಲೆಗಾರನ ಕುಂಚ ಅಲುಗಿತ್ತು ನೋಡ ಚಿತ್ತವೇ ಕಲಕಿತ್ತು

ಅವಳು ಆರ ಸೊತ್ತೋ ಆರ ಮುತ್ತೋ ಆರ ಸೆಳೆಯತ್ತೋ ಬ್ರಹ್ಮನ ಪುಟದಲಿ ಬರೆದಿತ್ತೋ

ಅವಳ ಅಂದವ ಸ್ಮರಿಸಿ ಚೆಂದವ ಹರಸಿ ಶ್ರೀಗಂಧದ ಬಂಧನ ಊರಿಗೆ ಊರೇ ಬಯಸಿತ್ತೋ

 

ಮಂಗಳವಾರ, ನವೆಂಬರ್ 12, 2024

ಮುಕ್ತಿಯ ನೀಡಮ್ಮ

 

ಮುಕ್ತಿಯ ನೀಡಮ್ಮ  



 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ   

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪಾಪದ ಒಡಲಲ್ಲೇ, ಪಾಪಿಯ ಮಡಿಲಲ್ಲೇ

ಬೆಳೆದಿಹೆ ನಾನಮ್ಮ, ಬೆಳೆದಿಹೆ ನಾನಮ್ಮ

 

ಪಾಪದ ಚರ್ಮವ, ಭೂಪನ ಕರ್ಮವ

ಹೊತ್ತಿಹೇ ನಾನಮ್ಮ, ಹೊತ್ತಿಹೇ ನಾನಮ್ಮ

ಆರದ ದಾಹ, ಯಾರದೋ ಗೇಹ, ತೋರುವ ದೇಹ

ಹೊತ್ತಿಹೇ ನೋಡಮ್ಮ, ಹೊತ್ತಿಹೇ ನೋಡಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

 

ಕರ್ಮವ ಕಳಚಿ, ಧರ್ಮವ ಬಾಚಿ

ಬಾಳುವೆ ನಾನಮ್ಮ, ಬಾಳುವೆ ನಾನಮ್ಮ

 

ಕಾಮದ ಆಟ, ಆ ಹುಡುಗಾಟ

ಇನ್ನೂ ಮಾಸಿಲ್ಲ ಓಹ್ ಓಹ್ ಇನ್ನೂ ಮಾಸಿಲ್ಲ ಓಹ್

ಆತನ ಚಟಕೆ, ಹರಿದಿಹ ಪಟಕೆ,

ನಾನೇ ಬಲಿಯಮ್ಮ ನಾನೇ ಕುರುಹಮ್ಮ,

ಮರ್ಮವಿದೇನಮ್ಮ  ಕರ್ಮವಿದೇಕಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಜನಗಳ ನೋಟ, ನಿತ್ಯದ ಕಾಟ

ದಹಿಸುವುದೇಕೆ, ಸಹಿಸಲು ಬೇಕೇ

ನನ್ನಯ ತಪ್ಪೇನು, ನಾನಿದ ಒಪ್ಪೇನು

ಕರ್ಮವ ತಿರುಚಿ, ಚರ್ಮವ ಕಳಚಿ

ಬಾಳುವೆ ನಾನಮ್ಮ, ಜಗಕೆ ಹೇಳುವೆಯೇನಮ್ಮ

 

ಕೆಸರಿನ ಕಮಲ, ಆಗುವ ಚಪಲ

ಛಲವನು ತೋರುವ, ಶೃಂಗವನೇರುವ  

ಬಯಕೆಯ ಹರಸಿ, ಕಲ್ಮಶ ಸರಿಸಿ

ಮುಕ್ತಿಯ ನೀಡಮ್ಮ, ನಮಿಸುವೆ ನಾನಮ್ಮ.

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪುಣ್ಯದ ಕಡಲಲ್ಲೀ ತೇಲಿಸು ನನ್ನಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮ

ಮಂಗಳವಾರ, ಅಕ್ಟೋಬರ್ 22, 2024

ಬಿ. ಎಂ. ಶ್ರೀ. ಗೆ ಅರ್ಚನೆ

 

ಬಿ. ಎಂ. ಶ್ರೀ. ಗೆ ಅರ್ಚನೆ



ನವೋದಯದರಸನೆ, ನವ್ಯ ಸ್ಥಾಪಕನೆ

ಕನ್ನಡದ ಕಣ್ವನೆಂಬಿರುದು ಪಡೆದವನೆ

ಉಸಿರ ಕೊಸರಿರುವನಕ ಕನ್ನಡವನೆ

ನೆಡುವಂತೆ, ನುಡಿವಂತೆಸಗಿದವನೆ

ಹಳಸದೆ, ಕೊಳೆಸದೆ ಉಳಿಸೆಂದವನೆ

ಬಳಸಿ, ಬೆಳೆಸುವೆಂತೆಸಗಿದ ಧೀರನೆ

ಅಮರ ‘ಶ್ರೀ’ವರ್ಯ ಬೆಳ್ಳೂರ ಸುತನೆ

ನಿನ್ನ ಸ್ತುತಿಯ ತುಂಬಿಹ ಪುಷ್ಪಾರ್ಚನೆ

ಮುದದಿ  ಕನ್ನಡ ನುಡಿಯುತ ನಿತ್ಯಾರ್ಚನೆ

ಪುಷ್ಪಾರ್ಚನೆ ‘ಶ್ರೀವರ್ಯ’ ನಿನಗೆ ನಿತ್ಯಾರ್ಚನೆ.

ರಚನೆ: ಡಾ. ಪ್ರಭಾಕರ್ ಬೆಳವಾಡಿ     

ಭಾನುವಾರ, ಅಕ್ಟೋಬರ್ 20, 2024

ಮುಕ್ತಿ

 

ಮುಕ್ತಿ  

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ   

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪಾಪದ ಒಡಲಲ್ಲೇ, ಪಾಪಿಯ ಮಡಿಲಲ್ಲೇ

ಬೆಳೆದಿಹೆ ನಾನಮ್ಮ, ಬೆಳೆದಿಹೆ ನಾನಮ್ಮ

 

ಪಾಪದ ಚರ್ಮವ, ಭೂಪನ ಕರ್ಮವ

ಹೊತ್ತಿಹೇ ನಾನಮ್ಮ, ಹೊತ್ತಿಹೇ ನಾನಮ್ಮ

ಆರದ ದಾಹ, ಯಾರದೋ ಗೇಹ, ತೋರುವ ದೇಹ

ಹೊತ್ತಿಹೇ ನೋಡಮ್ಮ, ಹೊತ್ತಿಹೇ ನೋಡಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

 

ಕರ್ಮವ ಕಳಚಿ, ಧರ್ಮವ ಬಾಚಿ

ಬಾಳುವೆ ನಾನಮ್ಮ, ಬಾಳುವೆ ನಾನಮ್ಮ

 

ಕಾಮದ ಆಟ, ಆ ಹುಡುಗಾಟ

ಇನ್ನೂ ಮಾಸಿಲ್ಲ ಓಹ್ ಓಹ್ ಇನ್ನೂ ಮಾಸಿಲ್ಲ ಓಹ್

ಆತನ ಚಟಕೆ, ಹರಿದಿಹ ಪಟಕೆ,

ನಾನೇ ಬಲಿಯಮ್ಮ ನಾನೇ ಕುರುಹಮ್ಮ,

ಮರ್ಮವಿದೇನಮ್ಮ  ಕರ್ಮವಿದೇಕಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಜನಗಳ ನೋಟ, ನಿತ್ಯದ ಕಾಟ

ದಹಿಸುವುದೇಕೆ, ಸಹಿಸಲು ಬೇಕೇ

ನನ್ನಯ ತಪ್ಪೇನು, ನಾನಿದ ಒಪ್ಪೇನು

ಕರ್ಮವ ತಿರುಚಿ, ಚರ್ಮವ ಕಳಚಿ

ಬಾಳುವೆ ನಾನಮ್ಮ, ಜಗಕೆ ಹೇಳುವೆಯೇನಮ್ಮ

 

ಕೆಸರಿನ ಕಮಲ, ಆಗುವ ಚಪಲ

ಛಲವನು ತೋರುವ, ಶೃಂಗವನೇರುವ  

ಬಯಕೆಯ ಹರಸಿ, ಕಲ್ಮಶ ಸರಿಸಿ

ಮುಕ್ತಿಯ ನೀಡಮ್ಮ, ನಮಿಸುವೆ ನಾನಮ್ಮ.

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪುಣ್ಯದ ಕಡಲಲ್ಲೀ ತೇಲಿಸು ನನ್ನಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮಾ 

ಮಂಗಳವಾರ, ಜುಲೈ 9, 2024

ಅಮ್ಮನ ಒಲವು

 ಅಮ್ಮನೊಲವು

 


 image courtesy Pinterest 


ಮರದ ಮೇಲೊಂದು ಕುಳಿತಿತ್ತು ಹಕ್ಕಿ

ರೆಕ್ಕೆ ಬಡಿಯುತ್ತಿತ್ತು ಖುಷಿಯಿಂದ ಉಕ್ಕಿ  

ಅದಕೊಂದು ಮಾಗಿದ ಮಾವಿನ ಹಣ್ಣು ಸಿಕ್ಕಿ

ತಿನ್ನ ಬಯಸಿತ್ತು ತನ್ನ ಕೊಕ್ಕಿನಿಂದ ಹೆಕ್ಕಿ ಕುಕ್ಕಿ.

 

ನೆನೆದು ಬಳಗವ ಕೂಗಲದು ‘ಚಿಕ್ ಚಿಕ್ ಚಿಕುವು’

ಬಂದವಗೋ ಮರಿಗಳು ಹಾಡುತ ‘ಚಿವ್ ಚಿವ್ ಚಿವು’

ನೀಗಿಸಿಲು ಆ ಮಾವು ತಮ್ಮಯ ಉದರದ ಹಸಿವು

ಕುಣಿದವಗೋ ಮರಿಬಳಗ ಮೆಚ್ಚಿ ಅಮ್ಮನಾ ಒಲವು.

 

ಅಮ್ಮನೇ ಗೆಲುವು, ಅಮ್ಮನಿರೆ ಬಲು ಚೆಲುವು

ಅಮ್ಮನಿರಲು ಎಮಗೆ ಅನುದಿನವೂ ಬಲವು

ಅಮ್ಮನಪ್ಪಿದರೆ ಹಾರಿ ಹೋಗದಿರದೇ ನೋವು

ಅಮ್ಮನಿರೆ ಗರಿಗೆದರಿ ದೂರ ಹಾರ ಬಲ್ಲೆವು ನಾವು.

 

ರಚನೆ: ಡಾ. ಬೆಳವಾಡಿ ಪ್ರಭಾಕರ್

prabhakarbelavadi@gmail.com

ಸೋಮವಾರ, ಜುಲೈ 1, 2024

 ಕಾಲದ ಮಹಿಮೆ

                                                                image courtesy Pinterest 


 

ಬಿಸಿಲಿನ ತಾಪಕೆ ಅದರುತ ಹಾರಿ

ಕಡಲಿನ ನೀರು ನಭವನು ಸೇರಿ

ಧೂಳಿನ ಕಣಗಳು ಮೋಡದಿ ತೂರಿ

ಮಳೆಯೇ ಸುರಿದಿದೆ ನೋಡದೋ ಜಾರಿ

 

ಬತ್ತಿದ ಗದ್ದೆಗೆ ನೀರಿನ ಹರಿವು

ಭತ್ತದ ತೆನೆಗೆ ನಲಿವೋ ನಲಿವು

ಬಿತ್ತಿದ ರೈತನು ಮರೆತನು ನೋವು

ಭತ್ತದ ಹೊಟ್ಟನು ಮೆಲುಕಿದೆ ಗೋವು

 

ರೈತನ ಕಣಜ ತುಂಬಿತ್ತು

ಬಂಡಿಯು ಸಂತೆಗೆ ಬಂದಿತ್ತು

ವರುಣಗೆ ಪೂಜೆಯು ಸಂದಿತ್ತು

ನೋವಿನ ಛಾಯೆ ನಂದಿತ್ತು

 

ಬೀದಿಯ ಬದಿಯ ವ್ಯಾಪಾರಿ

ಹರಾಜು ಹಾಕಿದ ನಗೆ ಬೀರಿ

ಬಂಗಲೆ ಭೂಪ ಕೊಂಡುಂಡ

ದುಡಿದಾ ರೈತ ನಂಜುಂಡ

 

ರಚನೆ: ಡಾ. ಬೆಳವಾಡಿ ಪ್ರಭಾಕರ್


ಭಾನುವಾರ, ಜೂನ್ 30, 2024

ಶೃಂಗೇರಿಯ ನವರಾತ್ರಿ ಉತ್ಸವ


 


ಶೃಂಗೇರಿಯ ನವರಾತ್ರಿ ಉತ್ಸವ

 

ಶೃಂಗಗಿರಿಯ ಸಿರಿ ಬನಗಳಲಿ, ತುಂಗೆಯ ತಿಳಿ ಸೆರಗಿನಲಿ
ನವರಾತ್ರಿಯ ನವ ವೈಭವದ ಉತ್ಸಾಹದ ದಿನಗಳಲಿ
ನವದುರ್ಗೆಯರ ಭವ್ಯ ರೂಪದರ್ಶನ, ನಿತ್ಯ ನವ ನೂತನ.

 

ಮಧು ಕೈತಭ, ಶುಂಭ-ನಿಶುಂಭ, ಮಹಿಷಾಸುರರ    

ಮರ್ಧಿನಿಯ ಹಿರಿಮೆಯ, ಛಲಬಿಡದ ಮಹಿಮೆಯ

ಕಹಳೆಯೋ, ಇದು ರಣ ಕೇಕೆಯ ಮೊಳೆತವೋ...

ರಕ್ಕಸರುಗಳ ದಾಳಿಯ, ಮಹಿಷರೂಪದ ಗೂಳಿಯ

ಸೊಕ್ಕನಡಗಿಸಿಹ ದೇವಿಯ, ಠಕ್ಕರಳಿಸಿದ ಮಾತೆಯ

ಡಿಂ ಡಿಮವೋ, ಇದು ರಣಚಂಡಿಯರ ಡಿಂ ಡಿಮವೋ.     

ಜಗತ್ಪ್ರಸೂತಿಕೆ ಜಗನ್ಮಾತೆಯ, ಹಂಸವಾಹನೆ ಬ್ರಾಹ್ಮಿಯ,

ವೃಶಭವಾಹನೆ ಮಾಹೇಶ್ವರಿಯ, ಸೊಬಗಿನ ಐಸಿರಿಯೋ.

 

ಮಯೂರವಾಹನೆ ಕೌಮಾರಿಯ, ಗರುಡವಾಹನೆ ವೈಷ್ಣವಿಯ ,

ಕಂಗೊಳಿಪ ಕಣ್ಸೆಳೆವ ಸೋಜಿಗದ ರೋಚಕ ನೋಟವೋ. 

 

ಇಂದ್ರಾಣಿಯ, ಮೋಹಿನಿಯ, ಚೈತನ್ಯದ ಸಿಂಹವೇರಿಪ ಚಾಮುಂಡಿಯ,

ಕಣ್ ಕಿಡಿಯ ಸುರಸುಂದರ ತ್ರಿಪುರ ಸುಂದರಿಯ ಚಿತ್ತಾರವೋ 

 

ಗಜಲಕ್ಷ್ಮಿ, ರಾಜರಾಜೇಶ್ವರಿ ರಾರಾಜಿಸುವ ವಿಜಯದಶಮಿಯ  

ವಿಜೃಂಭಣೆಯ ಮನಮೋಹಕ ದೃಷ್ಯದಾಲಿಂಗನವೋ

 

ನಿತ್ಯ ಹರಿದ್ರಾಕುಂಕುಮದಲಿ, ನಿತ್ಯ ತೇಯ್ದಗಂಧದ ಘಮದಲಿ    

ಅಭಿಷೇಕದ ವೈಭವ, ನಿತ್ಯೋತ್ಸವ ದೇವಿ ನಿನಗೆ ನಿತ್ಯೋತ್ಸವ.

 

ಕಾಣರಿಯದ ವೈಭವದಲಿ, ವೀಣಾ ವಾದನದ ತರಂಗಗಳಲಿ

ಸಾಲಂಕೃತ ಮಂಟಪದಲಿ,  ಮುತ್ತು,ರತ್ನಭರಿತ ಸಿಂಹಾಸನದಲಿ,

ಪುಷ್ಪೋತ್ಸವ ತಾಯೆ ನಿನಗೆ ಪುಷ್ಪೋತ್ಸವ, ನಿತ್ಯೋತ್ಸವ.                                  

                                                         

ಶೃತಿ, ಸ್ಮೃತಿ, ಪುರಾಣ ಸಂಪುಟಗಳಲಿ, ಚತುರ್ವೇದ ಪಂಡಿತರ ಕಂಠ ತೇಲಿ

ಮಂತ್ರೋತ್ಸವ ತಾಯೆ ಮಂತ್ರೋತ್ಸವ, ನಿನ್ನ ಸ್ತುತಿಸುವ ಮಂತ್ರೋತ್ಸವ.

ಶೃಂಗೇರಿಯ ಭವ್ಯ ಪಥಗಳಲಿ, ತುಂಗೆ ನದಿಯ ಶಾಂತತೆಯ ತಟಗಳಲಿ
ಗುಡಿಗೋಪುರಗಳ ಉತ್ತುಂಗದಲಿ, ದೀಪೋತ್ಸವ ತಾಯೆ ದೀಪೋತ್ಸವ.

ಸ್ವರ ಲಹರಿಯ ಗಾಯನೋತ್ಸವ, ತಾಯೆ ನಿನಗೆ ನಿತ್ಯೋತ್ಸವ

ದೀಪೋತ್ಸವ ದೇವಿ ಧ್ಯಾನೋತ್ಸವ, ತಾಯೆ ಅನ್ನದಾನೋತ್ಸವ.

 

ತೆನೆ ಕಟ್ಟಿ, ಕಂದನೆಟ್ಟ, ಚಿನ್ನದಂಬಾರಿಯಲಿ, ನಿನ್ನ ಅಮೋಘ ದರ್ಶನ

ಮಂಗಳ ವಾದ್ಯ ಹಿಮ್ಮೇಳದಲಿ, ಕೀಲ ನರ್ತನ, ಡೋಲು ಸಹಿತ ಕೀರ್ತನ.

 

ನೆರೆದ ಭಕ್ತರ ಮನಸೆಳೆವ ಆ ದಿವ್ಯ ರಥದಲಿ, ತೆಂಗ ಒಡೆದ, ಬಾಳೆ ಎಸೆದ,

ಆರತಿಯನೆತ್ತ ಲೀಲೆಯಲಿ, ನಿನಗೆ ರಥೋತ್ಸವ, ತಾಯೆ ರಥೋತ್ಸವ.

ಭೃಂಗಗಳ ಸವಿ ಝೇಂಕಾರದಲಿ, ತುಂಗಾ ನದಿಯ ಪಾವನದೊಡಲಲಿ  
ಮತ್ಸ್ಯಗಳು ಕುಣಿದು ನರ್ತಿಸುವಲಿ, ಸತ್ವಭರಿತ ವೇದಘೋಷಗಳ ಲೇಪನ.   

                            

ನಾಗಸ್ವರಗಳ ನೀನಾದದಲಿ, ಶೃಂಗಗುರುವರ್ಯರ ನೇತೃತ್ವದಲಿ  

ನಿನಗೆ ತೆಪ್ಪೋತ್ಸವ, ತಾಯೆ ತೆಪ್ಪೋತ್ಸವ, ನಿತ್ಯೋತ್ಸವ.

 

ಮಹಿಷಾಸುರನ ಮರ್ಧಿಸಿದ ದೇವರರಿಮೆಯ, ಸಂವತ್ಸರ, ಮನ್ವಂತರ ನೆನೆಸುವ  
ವಿಜಯೋತ್ಸವ ತಾಯೆ, ನಿನಗೆ ವಿಜಯೋತ್ಸವ, ದೇವಿ ವಿಜಯೋತ್ಸವ.

ದೀಪೋತ್ಸವ ತಾಯೆ, ದೀಪೋತ್ಸವ, ವಿಜಯೋತ್ಸವ ತಾಯೆ, ವಿಜಯೋತ್ಸವ.

 

ಊದುತ ದೇವಿಯ ರಣ ಕಹಳೆಯ, ಬಾರಿಸು ಮಾತೆಯ ಡಿಂ ಡಿಮವ,

ಹಾಡುತ ದೇವಿಯ ವಿಜಯ ಗಾಥೆಯ, ಬಾರಿಸು ಮಾತೆಯ ಡಿಂ ಡಿಮವ.

 

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಉತ್ತರಹಳ್ಳಿ, ಬೆಂಗಳೂರು .

ದೂ: 9448488910


ಊರ ಕನ್ನಿಕೆ ಊರ ಬಯಕೆ

  ಊರ ಕನ್ನಿಕೆ ಊರ ಬಯಕೆ  ಡಾ ಬೆಳವಾಡಿ ಪ್ರಭಾಕರ್  ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು ಸೀರಿಯ ನೆರಿಗೆಯ ಮಿಂಚಿನ ...