ಓ ಆದಿ ಶಂಕರಾಚಾರ್ಯರೇ...
ಓ ಆದಿ ಶಂಕರಾಚಾರ್ಯ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 1
|
ತುಂಗಾ ತಟದ ಶೃಂಗ ಗಿರಿಯಲಿ ಬದರಿ ಕೇದಾರದ ಹಿಮ ಗರ್ಭದಲಿ ಜಗನ್ನಾಥನ ಪುರಿಯ ದ್ವಾರದಿ ದ್ವಾರಕಾ ನಗರದ ಸುಂದರ ತಾಣದಿ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 6 |
ಮಲ್ಲಿಗೆ ಹೂವು ಸುಮ ತರುವಂತೆ ಕಾದ ಬೆಣ್ಣೆಯ ಘಮ ಬರುವಂತೆ ವಸಂತ ಋತುವಿನ ಚಿಗುರಿನೆಲೆಯಂತೆ ಆಧ್ಯಾತ್ಮದ ಭಾವ ಚಿಮ್ಮುತ ಬನ್ನೀರಿ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 2 |
ಹಿಂದೂ ಧರ್ಮದ ಸಾರವ ಬೀರುತ ಜಗಕೆ ಮುಕ್ತಿಯ ದ್ವಾರವ ತೋರುತ ದಂಡವ ಪಿಡಿದು ಅಖಂಡ ಸುತ್ತುತ ದಿನಕರ ಕೋಟಿ ತೇಜದಿ ಹೊಳೆಯುತ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 7 |
ಅತ್ತಿತ್ತಲುಗದೆ ಭಕ್ತರ ಮನದಲಿ ನಿತ್ಯ ನಿರಂತರ ಸೂಕ್ತದ ವನದಲಿ ಶಕ್ತಿಯೇ ತುಂಬಿಹ ನಿಮ್ಮಯ ಪದದಲಿ ಸ್ತೋತ್ರ ಸಾಗರ ಹರಿಸುತ ಮುದದಲಿ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 3 |
ಕನಕಧಾರೆಯ ಬರೆಯುತ ಬನ್ನಿ ಮನಕೆ ಮುದವನು ನೀಡಲು ಬನ್ನಿ ಪಂಚಕಾಷ್ಟಕ ಶತಕಾಷ್ಟಕ ತನ್ನಿ ಉಪನಿಷತ್ತುಗಳ ಸಾರವ ಪೇಳುತ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 8 |
ಹೆಜ್ಜೆಯ ಮೇಲೊಂದ ಹೆಜ್ಜೆಯನಿಕ್ಕುತ ಧರ್ಮದ ಗೆಜ್ಜೆಯ ನಾದವ ತೋರುತ ಕಾಲಟಿಯಿಂದ ಕೇದಾರ ಸಾಗುತ ಭವ್ಯ ಭಾರತವನೇ ಚಲಿಸುತ ಮೆರೆಯುತ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 4 |
ವಿಷ್ಣು ಲಲಿತೆಯರ ಸಹಸ್ರ ನಮಿಸಿ ಸಂಖ್ಯೆಯಿಲ್ಲದ ಗ್ರಂಥವ ರಚಿಸಿ ಶ್ರದ್ಧಾ ಭಕ್ತಿಯ ಸಾಗರ ಹರಿಸಿ ಚೊಕ್ಕ ಭಕ್ತರ ನಿತ್ಯವೂ ಹರಸಲು ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 9 |
ವಾದಿ ವಾದಗಳ ಮೆಟ್ಟಿ ನಿಲ್ಲುತ ಅಧ್ವೈತ ವಾದದ ಗಟ್ಟಿಯ ತೋರುತ ಪಂಡಿತೋತ್ತಮರ ದಿಘ್ಬ್ರಮೆಗೊಳಿಸುತ ಸರ್ವಜ್ಞ ಪೀಠದ ಮೆಟ್ಟಿಲನೇರುತ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 5 |
ಓ ಆದಿ ಶಂಕರಾಚಾರ್ಯ ಧರ್ಮ ಸಂರಕ್ಷಣಾರ್ಥಾಯ ಸಂಭವಾಮಿ ಯುಗೇ ಯುಗೇ ಆದಿಗುರು ಶಂಕರಾಚಾರ್ಯರೆ ಬನ್ನೀರಿ ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 10 |
ಇತಿ ಡಾ.ಪ್ರಭಾಕರ ವಿರಚಿತ “ಆದಿಗುರು ಶಂಕರಾಚಾರ್ಯ” ದಶಕಮಿದಂ ಲೋಕ ಸಮರ್ಪಣಂ. ಯಃ ಪಠೇಥ್ ನಿತ್ಯಂ, ಲಭತಿ
ಸಕಲ ಸೌಭಾಗ್ಯಂ, ಶೃಣುಯಾತ್ ಖಚಿತಂ ನಿತ್ಯಾನಂದಂ, ಲಿಖಿತಂ ದಿವ್ಯ ಸನ್ನಿಧಿಂ.
ರಚನೆ: ಡಾ. ಪ್ರಭಾಕರ್ ಬೆಲವಾಡಿ
11, ಚಿರಂಜೀವಿ, ಲಕ್ಕಣ್ಣ ಬಡಾವಣೆ, ಸುಬ್ರಮಣ್ಯಪುರ
ರಸ್ತೆ, ಉತ್ತರಹಳ್ಳಿ, ಬೆಂಗಳೂರು 560001
ಸಂ: 94484 88910 ಇಮೇಲ್: prabhakarbelavadi@gmail.com