ಮಂಗಳವಾರ, ಅಕ್ಟೋಬರ್ 20, 2020

ಜ್ಞಾನಾರ್ಜನ ಮಾರ್ಗಂ

ಜ್ಞಾನಾರ್ಜನ ಮಾರ್ಗಂ   


ಶ್ರವಣಂ ಜ್ಞಾನಂ, ಜ್ಞಾನಂ ಶ್ರವಣಂ,

ಸದ್ಗುರು ಮುಖೇನ ಪುನರಪಿ ಶ್ರವಣಂ,

ಪಚತಿ ಪಚತಿ ದದಾತಿ ಶ್ರವಣ ಜ್ಞಾನಂ,

ಇಹ ಸಂಸಾರೇ ಬಹು ದುಸ್ತಾರೇ.

 

ಪಠಣಂ ಪಠಣಂ, ಪುನರಪಿ ಪಠಣಂ,

ಅಮೂಲ್ಯ ಶಾಸ್ತ್ರಂ, ಪವಿತ್ರ ಗ್ರಂಥಂ,      

ನಿಯತಿ ನಿಯತಿ ಅವಗತ ಜ್ಞಾನಂ,

ಇಹ ಸಂಸಾರೇ ಬಹು ದುಸ್ತಾರೇ.

 

ಮನನಂ ಮನನಂ, ಪುನರಪಿ ಮನನಂ,

ಅಸ್ಮಿನ್ ಜನ್ಮನಿ ಜೀವಾನುಭವಸಾರಂ,

ದದಾತಿ ದದಾತಿ ಅನುಭವ ಜ್ಞಾನಂ,

ಇಹ ಸಂಸಾರೇ ಬಹು ದುಸ್ತಾರೇ.

 

ಸ್ಮರಣಂ ಧ್ಯಾನಂ, ಜ್ಞಾನ ಪ್ರಕಾಶಂ,

ಗ್ರಹನಮ್ ಕರೋತಿ ಅರ್ಚಿತ ಗೇಹಂ, 

ಜ್ಞಾನ ಪ್ರತಿಷ್ಟ್ಥಿತಿ ನಿತ್ಯ ನಿರಂತರೇ,

ಇಹ ಸಂಸಾರೇ ಬಹು ದುಸ್ತಾರೇ.

 

ಜ್ಞಾನ ವಿಹೀನಃ ಸರ್ವಮತೇನ,

ಭಜತಿ ನ ಮುಕ್ತಿಂ ಜನ್ಮ ಶತೇನ,

ನಹಿ ನಹಿ ರಕ್ಷತಿ ಪಾಹಿ ಮುರಾರೇ,

ಮಾನವ ಜನ್ಮಃ ಬಹು ದುಸ್ತಾರೇ.

 

ಜ್ಞಾನಂ ಸಕಲಂ, ಜ್ಞಾನಂ ಅಖಿಲಂ,

ಅಖಿಲಂ ಜ್ಞಾನಂ ಮೂಢಮತೇ,

ಚಾರಿಣ್ ಏವಂ ಜ್ಞಾನಂ ಪ್ಯಾರೇ,

ಬ್ರಹ್ಮದ್ವಾರಂ ಸುಖ ಸಂಸಾರೇ.  


Thanks for the Photo by Aziz Acharki on Unsplash

ಗುರುವಾರ, ಅಕ್ಟೋಬರ್ 15, 2020

ಶ್ರೀ ಕೃಷ್ಣನ ತುಲಾಭಾರ – ನೂತನ ಅವಿಷ್ಕಾರ

 

ಶ್ರೀ ಕೃಷ್ಣನ ತುಲಾಭಾರ – ನೂತನ ಅವಿಷ್ಕಾರ


ಅಂದು ಹುಣ್ಣಿಮೆ. ಬೆಳ್ಳನ ಬೆಳದಿಂಗಳಲ್ಲಿ ದ್ವಾರಕೆಯ ಅರಮನೆಯ ಅಂಗಳದಲ್ಲಿ ರುಕ್ಮಿಣಿ, ಸತ್ಯಭಾಮ ಮತ್ತು ಜಾಂಬುವತಿ ಪಗಡೆ ಆಡುತ್ತಾ ಸಂತೋಷದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದರು. ಅರಮನೆಗೆ ಬಂದಿದ್ದ ಅರ್ಜುನನನ್ನು ಪ್ರೀತಿಸಲು ಪ್ರಾರಂಭಿಸಿದ್ದ ಸುಭದ್ರೆಗೆ ಒಂದು ಸಂಶಯ ಮೂಡಿತು. ಈ ಪ್ರೀತಿಯನ್ನು ಅಳೆಯುವುದು ಹೇಗೆಂದು? ಈ ವಿಷಯದಲ್ಲಿ ಅನುಭವಿಗಳಾದ ಮೂವರನ್ನು ಕೇಳೋಣವೆಂಬ ಕುತೂಹಲದಿಂದ ಪಗಡೆ ಆಟದಲ್ಲಿ ಮಗ್ನರಾಗಿದ್ದ ಮೂವರ ಬಳಿ ಬಂದು ತನ್ನ ದುಗುಡವನ್ನು ಹೇಳಿಕೊಂಡಳು. ಈ ವಿಷಯದಲ್ಲಿ ಎಂದೂ ತಲೆ ಕೆಡೆಸಿಕೊಂಡಿರದ  ಆ ಮೂವರಿಗೂ ಕುತೂಹಲ ಮೂಡಿತು. ಹೌದಲ್ಲ, ತಾವು ಈ ಬಗ್ಗೆ ಗಮನವನ್ನೇ ಹರಿಸಿಲ್ಲ, ಈಗೇಕೆ ತಮ್ಮಲ್ಲಿ ಯಾರು ಕೃಷ್ಣನನ್ನು ಹೆಚ್ಚು ಪ್ರೀತಿಸುವವರು ಎಂದು ಪರೀಕ್ಷಿಸಬಾರದು ಎಂಬ ಜಿಜ್ನಾಸದಲ್ಲಿ ತೊಡಗಿದರು.

ಈಗ ಆಡುತ್ತಿರುವ ಪಗಡೆ ಆಟವೇ ನಿರ್ಣಾಯಕವಾಗಲಿ ಎಂಬ ಸಲಹೆ ಬಂತು. ಆದರೆ ಪಗಡೆ ಆಟದಿಂದ ಆದ ಅನಾಹುತಗಳ ದೃಶ್ಯ ಕಣ್ಣ ಮುಂದೆ ಬಂದು ಅದನ್ನು ಕೈ ಬಿಡಲಾಯಿತು. ಕೊನೆಗೆ ಸುಭದ್ರೆಯ ಸಲಹೆಯಂತೆ ಕೃಷ್ಣನ ತುಲಾಭಾರ ನಡೆಸಿ, ಈ ಮೂವರಲ್ಲಿ ಯಾರು ಅತಿ ಕಡಿಮೆ ವಸ್ತುಗಳನ್ನುಇಟ್ಟು ಕೃಷ್ಣನ ಭಾರವನ್ನು ಮೀರಿಸುತ್ತಾರೋ ಅವರು ಕೃಷ್ಣನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ನಿರ್ಧರಿಸಲಾಯಿತು. ಸರಿ ಮರುದಿನವೇ ತುಲಾಭಾರಕ್ಕೆ ಅಣಿಯಾಯಿತು.

ಶ್ರೀ ಕೃಷ್ಣ ಎಂದಿನಂತೆ ಮುಸುನಗುತ್ತಾ ತಕ್ಕಡಿಯ ಒಂದು ಭಾಗದಲ್ಲಿ ವಿರಾಜಮಾನನಾದನು. ಮತ್ತೊಂದೆಡೆ ಮೂವರಲ್ಲಿ ಯಾರು ಮೊದಲು ವಸ್ತುಗಳನ್ನು ಇಡಬೇಕೆಂಬ ಚರ್ಚೆ ಪ್ರಾರಂಭವಾಯಿತು. ಅಹಂಕಾರದಿಂದ ಮೆರೆಯುತ್ತಿದ್ದ ಸತ್ಯಭಾಮೆ ತಾನೇ ಹೆಚ್ಚು ಪ್ರೀತಿಸುವುದು, ಅದಕ್ಕೇ ಕೃಷ್ಣ ಪಾರಿಜಾತ ಗಿಡವನ್ನೇ ತನಗೆ ತಂದುಕೊಟ್ಟಿದ್ದು, ಆದ್ದರಿಂದ ತನಗೇ ಮೊದಲ ಆದ್ಯತೆ ಎಂದು ಪಟ್ಟು ಹಿಡಿದಳು. ಹಿರಿಯಳೂ ಮತ್ತು ಅತಿಯಾದ ವಿಶ್ವಾಸವಿದ್ದ ರುಕ್ಮಿಣಿ ಮುಗುಳ್ನಗುತ್ತಾ ಇದಕ್ಕೆ ಸಮ್ಮತಿಸಿದಳು. ಕಿರಿಯಳಾದ ಜಾಂಬುವತಿ ತನ್ನ ಪ್ರೀತಿಯ ಮೇಲೆ ನಂಬಿಕೆಯಿಟ್ಟು ಸುಮ್ಮನಾದಳು.

ಸತ್ಯಭಾಮೆ ಜಂಭದಿಂದ ಮೆರೆಯುತ್ತಾ ತನ್ನ ಬಳಿ ಸಂಗ್ರಹಿಸಿದ್ದ ವಸ್ತುಗಳನ್ನು ಒಂದೊಂದಾಗಿ ಇಡಲಾರಂಭಿಸಿದಳು. ಆಕೆಯ ಲಕ್ಷ್ಯ ಕೇವಲ ತಕ್ಕಡಿಯ ಏರಿಳಿತಗಳ ಕಡೆಯೇ ಕೇಂದ್ರೀಕೃತವಾಗಿತ್ತು. ಕೃಷ್ಣನ ಕಡೆ ತಿರುಗಿಯೂ ನೋಡಲಿಲ್ಲ. ಆಕೆಯ ಅಧೀನದಲ್ಲಿದ್ದ ಆಭರಣಗಳೂ ಸೇರಿ ಎಲ್ಲವನ್ನೂ ಇಟ್ಟರೂ ತಕ್ಕಡಿ ಮಣಿಯಲಿಲ್ಲ. ತಾನು ಧರಿಸಿದ್ದ  ಆಭರಣಗಳನ್ನೂಇಟ್ಟಿದ್ದಾಯಿತು. ಸಪ್ಪೆ ಮುಖ ಮಾಡಿಕೊಂಡ ಸತ್ಯಭಾಮೆ ಆಶ್ಚರ್ಯ ಚಕಿತಳಾದಳು.

ಈಗ ರುಕ್ಮಿಣಿಯ ಸರದಿ ಬಂತು. ತನ್ನ ಭಕ್ತಿಗೆ ಮೆಚ್ಚಿ ಅಪಹರಿಸಿ ಮದುವೆಯಾದ ಕೃಷ್ಣನನ್ನು ತನಗಿಂತ ಹೆಚ್ಚು ಪ್ರೀತಿಸಲು ಯಾರಿಗೆ ಸಾಧ್ಯ ಎಂಬ  ಅತಿಯಾದ ಆತ್ಮವಿಶ್ವಾಸದಿಂದ ಕೃಷ್ಣನ ಕಡೆ ಕಿರುನೋಟ ಬೀರಿ ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಇಟ್ಟಳು. ತಕ್ಕಡಿ ಸ್ವಲ್ಪ ಅಲುಗಾಡಿತಾದರೂ ಕೃಷ್ಣನ ತೂಕಕ್ಕೆ ಸಮನಾಗಲಿಲ್ಲ. ಆದರೆ ಆಕೆ ಅಷ್ಟೊಂದು ವಿಚಳಿತಲಾಗಲಿಲ್ಲ. ಇದು ಕೃಷ್ಣನ ಲೀಲೆಗಳ ಒಂದು ಪುಟ್ಟ ಪ್ರಹಸನವೆಂದು ಸುಮ್ಮನಾದಳು.

ಅತ್ಯಂತ ಕಿರಿಯಳಾದ ಜಾಂಬುವತಿ ನಯವಿನಯದಿಂದ ಕೃಷ್ಣನ ಬಳಿ ಬಂದು, ಆತನನ್ನು ತಕ್ಕಡಿಯಿಂದ ಇಳಿಸಿ, ಪಾದ ಪೂಜೆ ಮಾಡಿ, ತನಗೆ ಆಶೀರ್ವದಿಸಬೇಕೆಂದು ಬೇಡಿಕೊಂಡಳು. ನಸುನಗುತ್ತಾ ಶ್ರೀ ಕೃಷ್ಣನು ಆಶೀರ್ವದಿಸಿ, ಆಕೆಗೆ ಈ ಹಿಂದೆ ಗಣೇಶನು ಕೇವಲ ಶಿವ-ಪಾರ್ವತಿಯರ ಸುತ್ತ ಪ್ರದಕ್ಷಿಣೆ ಹಾಕಿ ಸ್ಪರ್ಧೆ ಗೆದ್ದಿದ್ದನ್ನು ಸ್ಮರಣೆ ಮಾಡಿಕೊಳ್ಳುವಂತೆ ಮಾಡಿದನು. ಜೊತೆಗೆ ಪತಿ ಪತ್ನಿಯರ ಪ್ರೀತಿ, ಸ್ಪರ್ಧೆಗಳಲ್ಲಿ ಪ್ರದರ್ಶಿಸುವ ವಸ್ತುವಲ್ಲ ಎಂದು ಬುದ್ಧಿವಾದದ ಮಾತನ್ನು ಅರುಹಿದನು. ಇದನ್ನು ಗ್ರಹಿಸಿದ ಜಾಂಬುವತಿಯು ತಕ್ಕಡಿಯ ಮತ್ತೊಂದು ಭಾಗಕ್ಕೆ ಬಂದು, ವಸ್ತುಗಳನ್ನು ಇಡದೇ, ನಮ್ರತೆಯಿಂದ ಒಂದು ಧನ್ಯತೆಯ ‘ಮುತ್ತು’ ಕೊಟ್ಟು ತನ್ನೆಲ್ಲಾ ಪ್ರೀತಿಯನ್ನು ಕೃಷ್ಣನಿಗೆ ಒಪ್ಪಿಸಿದಳು.

ನೋಡು ನೋಡುತ್ತಿದ್ದಂತೆಯೇ ತಕ್ಕಡಿ ಕೆಳಗಿಳಿದು ಬಿಟ್ಟಿತು.

ವಿಜಯಿಯಾದ ಜಾಂಬುವತಿಯಿಂದ, ಕೃಷ್ಣ ಆಕೆಗೆ ಹೇಳಿದ ನೀತಿಯ ಮಾತುಗಳನ್ನು ಕೇಳಿದ ಸುಭದ್ರೆಗೆ ತನ್ನ ತಪ್ಪಿನ ಅರಿವಾಗಿ, ತನ್ನ ಅರ್ಜುನನ ಮೇಲಿನ ಪ್ರೀತಿಯನ್ನು ಓರೆಗಲ್ಲಿಗೆ ಹಚ್ಚುವ ಹುಚ್ಚನ್ನು ಬಿಟ್ಟುಬಿಟ್ಟಳು. ರುಕ್ಮಿಣಿ, ಸತ್ಯಭಾಮೆಯರ ಬಳಿ ಬಂದು ತನ್ನ ತಪ್ಪಿಗೆ ಕ್ಷಮೆ ಯಾಚಿಸಿದಳು. ‘ಶ್ರೀ ಕೃಷ್ಣಾರ್ಪಣ ಮಸ್ತು.’

I acknowledge with thanks Pinterest and kshetrapuranas.wordpress.com for the photo of tulabhara.

ಮಂಗಳವಾರ, ಅಕ್ಟೋಬರ್ 13, 2020

ನೀತಿ ರಾಮಾಯಣ ಒಂದು ಹೊಸ ಕೊಂಡಿ

“ನೀತಿ ರಾಮಾಯಣ” 




ಅವಧೂತ ಪುರಾಣಿಕರು ಕಂದ ಪುರಾಣದ ಮತ್ತೊಂದು ಕಥೆಯನ್ನು ಆಂಜನೇಯನ ಭಕ್ತಾದಿಗಳ ಶ್ರೇಯಸ್ಸಿಗಾಗಿ ಹೇಳಲಾರಂಭಿಸಿದರು.

ಹರಿಕಥೆ 

ಬೆಲಗೂರಿನ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ನೆರೆದಿರುವ ಭಕ್ತಾದಿಗಳೆ ಕೇಳುವಂತವರಾಗಿ, ದಿವ್ಯ ಸ್ವರೂಪಿಯಾದ ವಿಷ್ಣುವು ಲೋಕಕಲ್ಯಾಣಕ್ಕಾಗಿ ಸಂಭವಾಮಿ ಯುಗೇ ಯುಗೇ ಎನ್ನುವಂತೆ ದಶಾವತಾರಗಳನ್ನು ಎತ್ತಿದ್ದು ತಮಗೆಲ್ಲಾ ಗೊತ್ತೇ ಇದೆ. ಇದರಲ್ಲಿ ನಾವೆಲ್ಲಾ ಭಕ್ತಿಯಿಂದ ಪೂಜಿಸುವ ಹಾಗೂ ಆಂಜನೇಯನ ಹೃದಯ ದೇವತೆಯಾದ ಶ್ರೀರಾಮನ ಅವತಾರವೂ ಒಂದು. ಈ ಅವತಾರ ಹೇಗಾಯಿತು, ಎಲ್ಲಾಯಿತು, ಏತಕ್ಕಾಗಿ ಆಯಿತು ಎಲ್ಲವನ್ನೂ ಸಂಕ್ಷಿಪ್ತವಾಗಿ ಸಾರಾಂಶದ ರೂಪದಲ್ಲಿ ತಿಳಿಸುತ್ತೇನೆ. ಕೇಳುವಂತವರಾಗಿ ಎಂತೆಂದರು.

ರಾಕ್ಷಸ ರ  ಉಪಟಳ 

ಭರತ ಖಂಡದ ಉತ್ತರ ಭಾಗದಲ್ಲಿ ಅಯೋಧ್ಯಾ ಎಂಬ ಪಟ್ಟಣದ ಸುತ್ತಮುತ್ತ ಲಂಕಾ ಪ್ರದೇಶದಿಂದ ಬಂದ ರಾಕ್ಷಸರುಗಳ ಉಪಟಳ ಅಸಾಧುವಾಗಿತ್ತು. ಅಲ್ಲೆಲ್ಲಾ ಬಹುದಿನಗಳಿಂದ ತಮ್ಮ ತಮ್ಮ ಆಶ್ರಮಗಳಲ್ಲಿ ನೆಲಸಿದ್ದ ಋಷಿವರ್ಯರುಗಳಿಗೆ ಪದೇ ಪದೇ ತಪೋಭಂಗ ಆಗುತ್ತಿತ್ತು. ಒಂದು ದಿನ ಅವರೆಲ್ಲಾ ಸಭೆ ಸೇರಿ. ಅನಂತಶಯನನಾದ ಭಗವಾನ್ ಶ್ರೀವಿಷ್ಣುವಿನ ಬಳಿ ಹೋಗಿ ತಮಗೆ ಆಗುತ್ತಿರುವ ಈ ತೊಂದರೆಯನ್ನು ನಿವಾರಿಸುವಂತೆ ಬೇಡಿಕೊಳ್ಳಬೇಕೆಂದು ನಿರ್ಧರಿಸಿದರು. ಶ್ರೀ ವಿಷ್ಣುವು ಇವರ ದುಗುಡದ ವಿಷಯವನ್ನು ಕೇಳಿ, ಅಭಯ ಹಸ್ತವನ್ನು ನೀಡಿ, ತಾನೇ ಸ್ವತಃ ಒಂದು ಅವತಾರದಲ್ಲಿ ಈ ಕರ್ಮ ಭೂಮಿಗೆ ಬಂದು ಉಪದ್ರವವನ್ನು ನಿವಾರಿಸುವುದಾಗಿ ತಿಳಿಸಿದನು. ಸದಾ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ ಶ್ರೀ ವಿಷ್ಣುವು ತತ್ಕ್ಷಣ ಕಾರ್ಯೋನ್ಮುಖನಾದನು.

ಶ್ರೀರಾಮನ ಜನನ 

ದಶ ದಿಕ್ಕುಗಳಲ್ಲಿ ಚಲಿಸುವ ಶಕ್ತಿಯುಳ್ಳ ತನ್ನ ಗರುಡರಥವನ್ನು ಕರೆದು, ಈ ಕೂಡಲೆ ಭರತ ಖಂಡದಲ್ಲಿ ಅಯೋಧ್ಯಾ ಎಂಬ ಪಟ್ಟಣದಲ್ಲಿ ದಶರಥ ರಾಜ ಮನೆತನದಲ್ಲಿ ತಾನು ಜನಿಸಬೇಕೆಂದೂ ಆಜ್ಞಾಪಿಸಿದನು.ಈ ದಶರಥರಾಜನಿಗೆ ಅನೇಕ ಹೆಂಡತಿಯರು ಇದ್ದರು.  ಈ ಧರ್ಮಪತ್ನಿಯರಲ್ಲಿ ಕೌಸಲ್ಯ ಎಂಬವಳು ಒಬ್ಬಳು. ಬಹಳ ದಿನಗಳಾದರೂ ಮಕ್ಕಳಾಗದ ಕಾರಣ ದಶರಥನು ಗುರುಗಳಲ್ಲಿ ನಿವೇದಿಸಲು ಅವರು ಒಂದು ಫಲವನ್ನು ಪೂಜಿಸಿ ಅದರಲ್ಲಿ ಸಂತಾನಶಕ್ತಿ ಬೀಜ ಮಂತ್ರವನ್ನು ಉಪದೇಶಿಸಿ ಆಶೀರ್ವದಿಸಿ ಕೌಸಲ್ಯೆಗೆ ತಿನ್ನಲು ಕೊಡುವಂತೆ ಹೇಳಿದರು. ಕೆಲವು ದಿನಗಳ ನಂತರ ಗರ್ಭವತಿಯಾದ ಕೌಸಲ್ಯೆಯು ಗಂಡು ಮಗುವಿಗೆ ಜನ್ಮವಿತ್ತಳು. ಮತ್ತೆ ನಾಮಕರಣ ಮಾಡಲು ಗುರುಗಳ ಬಳಿ ಬಂದಾಗ ದೂರದೃಷ್ಟಿಯುಳ್ಳ ಗುರುಗಳು ಈತನು ಶ್ರೀಮನ್ನಾರಾಯಣನೇ, ರಾವಣನ ರ್ಧನಕ್ಕಾಗಿ ಅವತರಿಸಿದ್ದಾನೆಂದು ಮನಗಂಡು ಮಗುವಿಗೆ “ಶ್ರೀರಾಮ” ಎಂದು ಹೆಸರಿಟ್ಟರು. 

ವಾಲ್ಮೀಕಿ ಆಶೀರ್ವಾದ  

ಈ ಶ್ರೀರಾಮನ ಬಾಲ್ಯ ಲೀಲೆ, ಧನು ದೆಷೆಯಿಂದ ಜಾನಕಿಯನ್ನು ವರಿಸಿದ್ದು, ಕೈಕೇಯಿಯ ಅನುಗ್ರಹದಿಂದ ಕಾಡಿಗೆ ಬಂದದ್ದು, ಮಾಯಾ ಜಿಂಕೆಯ ಆಸೆಯಿಂದ ಸೀತೆ ರಾವಣನ ಅಪಹರಣಕ್ಕೆ ಒಳಗಾದದ್ದು ಎಲ್ಲವನ್ನೂ ಹಿಂದಿನ ವರ್ಷದ ಬ್ರಹ್ಮ ರಥೋತ್ಸವದ ಸಮಯದಲ್ಲಿ ಸವಿತ್ಸಾರವಾಗಿ ತಿಳಿಸಿದ್ದೇನೆ. ಪ್ರಮಾದವಶಾತ್ ವಾಲ್ಮೀಕಿ ಮುನಿವರ್ಯರು ರಾಮಾಯಣವನ್ನು ರಚಿಸುವಾಗ ಒಂದು ಭಾಗವನ್ನು  ಬರೆಯಲು ಆಗಿರಲಿಲ್ಲ. ಕೆಲವು ದಿನಗಳ ಹಿಂದೆ ವಾಲ್ಮೀಕಿ ಮಹರ್ಷಿಯವರು ಬೆಲಗೂರಿನ ಅಳಿಯಂದಿರಾದ ಪ್ರಭಾಕರವರ ಸ್ವಪ್ನದಲ್ಲಿ ಬಂದು, “ಎಲೈ ಪ್ರಭಾಕರ್ ಅವರೇ ತಮ್ಮ ನಾಮಧೇಯವು ಸೂರ್ಯನ ಹೆಸರಿಗೆ ಹೋಲುತ್ತದೆ, ಜೊತೆಗೆ ಶ್ರೀರಾಮನೂ ಸೂರ್ಯವಂಶಿಯು, ಅಲ್ಲದೇ ಇತ್ತೀಚನ ದಿನಗಳಲ್ಲಿ ತಮಗೆ ಆಧ್ಯಾತ್ಮದ ಶೈಲಿಯಲ್ಲಿ ಬರೆಯುವ ಕಲೆ ಕರಗತವಾಗಿದೆ. ಆದ್ದರಿಂದ ನಾನು ರಾಮಾಯಣ ಬರೆಯುವಾಗ ಬಿಟ್ಟು ಹೋದ ಅತ್ಯಂತ ಪ್ರಮುಖವಾದ ಘಟ್ಟವನ್ನು ನೀವೇ ಸೂಕ್ತ ವ್ಯಕ್ತಿಯೆಂದು ನಿಮ್ಮಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯಲು ಉತ್ಸುಕನಾಗಿ ಬಂದಿದ್ದೇನೆ ಎಂದು ತಿಳಿಸಿ ಬ್ರಹ್ಮಿ ಮುಹೂರ್ತದ ವರೆಗೂ ಅವಿರತವಾಗಿ ಬರೆಸಿದ್ದಾರೆ. ಈ ಬ್ರಹ್ಮ ರಥೋತ್ಸವದ ಸಮಯದಲ್ಲಿ ಭಕ್ತಾದಿಗಳಿಗೆ ಈ “ನೀತಿ ರಾಮಾಯಣ” ಭಾಗವನ್ನು ತಿಳಿಸುತ್ತೇನೆ. ಕೇಳುವಂತವರಾಗಿ ಎಂದು ಭಜಿಸಲು ಪ್ರಾರಂಭಿಸಿದರು.

“ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯ ತವ ಕಿಂ ವದ, ರಾಮಧೂತ ಕೃಪಾ ಸಿಂಧೋ ಮತ್ಕಾರ್ಯ ಸಾಧಯ ಪ್ರಭೋ.”



“ರಾಮ ಲಕ್ಷ್ಮಣ್ ಜಾನಕಿ, ಜೈ ಬೋಲೋ ಹನುಮಾನ್ ಕೀ, ಜಾನಕಿ ಶೋಧಕ ವಾನರ ಕೀ, ಜೈ ಬೋಲೋ ಹನುಮಾನ್ ಕೀ”.

ನೀತಿ ಪಾಠ 

ಶ್ರೀ ರಾಮ, ಲಕ್ಷ್ಮಣ, ಜಾಂಬುವಂತ, ಹನುಮಂತ ಹಾಗೂ ವಾನರ ಸೇನೆ ದಕ್ಷಿಣ ಭಾರತದ ತಟದ ತನಕ ಬಂದಿದ್ದರು. ಆದರೂ ರಾಮನಿಗೆ ಸೀತೆಯಿರುವುದು ಖಾತ್ರಿಯಾದರೆ ಮಾತ್ರ ಲಂಕೆಗೆ ನುಗ್ಗಬೇಕು, ಇಲ್ಲವಾದರೆ ವೃತಾ ನೀತಿಗೆ ವಿರುದ್ಧವಾಗಿ ದಾಳಿ ಮಾಡಿದಂತಾಗುತ್ತದೆಂದು ಭಾವಿಸಿ, ಹನುಮಂತನನ್ನು ಲಂಕೆಗೆ ಕಳುಹಿಸಿದನು. ಚಂಗನೆ ಹಾರಿದ  ಆತ, ಅಶೋಕ ವನದಲ್ಲಿ ವ್ಯಾಕುಳಲಾಗಿ ಕುಳಿತಿದ್ದ ಸ್ತ್ರೀಯನ್ನು ಕಂಡು ಈಕೆಯೇ ಸೀತಾಮಾತೆಯೆಂದು ಭಾವಿಸಿದನು.



 ತತ್ಕ್ಷಣ ಈ ವಿಷಯವನ್ನು ರಾಮನಿಗೆ ಬಂದು ತಿಳಿಸಿ, “ಮಹಾಪ್ರಭುಗಳೇ, ತಾವು ಆಜ್ಞಾಪಿಸಿದರೆ ಕೂಡಲೆ ಹಾರಿ ಮಾತೆಯನ್ನು ಹೊತ್ತು ತರುವೆ, ಇಲ್ಲವಾದರೆ ಇಡೀ ಅಶೋಕವನವನ್ನೆ ಬೇಕಾದರೆ ಎತ್ತಿ ತರುವೆ.” ಎಂದು ಅರುಹಿದನು. ಅದಕ್ಕೆ ರಾಮನು, “ಭಕ್ತ ಹನುಮ, ನಿನ್ನ ಸಲಹೆ ಗಮನಾರ್ಹ ಮತ್ತು ನಿನ್ನ ಶಕ್ತಿಯ ಮೇಲೆ ನನಗೆ ಅಪಾರ ನಂಬಿಕೆ ಹಾಗೂ ಗೌರವ ಇದೆ. ಆದರೆ ಇದು ನೀತಿಗೆ ವಿರುದ್ಧವಾದದ್ದು. ಕ್ಷತ್ರಿಯನಾದ ನಾನು ಹೋರಾಡಿ ಸೀತೆಯನ್ನು ಮರಳಿ ಪಡೆಯುವುದು ನ್ಯಾಯ ಸಮ್ಮತ. ಅಲ್ಲವೇ?” ಎಂದು ಹನುಮನಿಗೆ ನೀತಿ ಪಾಠ ಮಾಡಿದನು. ಶ್ರೀ ರಾಮನ ರೂಪದಲ್ಲಿದ್ದ ವಿಷ್ಣುವು  ತಾನು ಈ ಅವತಾರ ಧರಿಸಿದ್ದು ರಾವಣನ ಸಂಹಾರಕ್ಕಾಗಿ ಎಂದು ಮನಸ್ಸಿನಲ್ಲೇ ಅಂದುಕೊಂಡು ಮುಗುಳ್ನಕ್ಕನು.


ನಾಂದಿ 

 ಈ ನೀತಿಯ ಅಂಶವನ್ನು ಬರೆಯುವುದು ಆಗಿರಲಿಲ್ಲ. ಈಗ ನಿನ್ನಿಂದ ಆಗಲಿ ಎಂದು ಪ್ರಭಾಕರನ ಕೈಯಲ್ಲಿ ಬರೆಹಿಸಿ ಸೂರ್ಯೋದಯ ಆಗುವುದರಲ್ಲಿ ವಾಲ್ಮೀಕಿ ಮಹರ್ಷಿಗಳು ಅಂತರ್ದಾನರಾದರು.

ಇತ್ತ ಬೆಲಗೂರಿನಲ್ಲಿ ಹರಿಕತೆ ಮಾಡುತ್ತಿದ್ದ ಅವಧೂತ ಪುರಾಣಿಕರು, ಹೀಗೇ ಹನುಮ ಸೀತಾ ಮಾತೆಯನ್ನೋ ಅಥವಾ ಇಡೀ ಅಶೋಕವನವನ್ನೆ ಹೊತ್ತು ತಂದು ಬಿಟ್ಟಿದ್ದರೆ ರಾಮಾಯಣದ ಕತೆ ಅಲ್ಲಿಗೆ ಮೊಟಕಾಗಿ ತಮ್ಮಂತವರಿಗೆ ಸಂಗತಿಗಳು ಇಲ್ಲದಂತಾಗಿ ಬಿಡುತ್ತಿತ್ತು ಎಂದು ಒಳಗೊಳಗೇ ನಗುತ್ತಾ ಹಾಡಲು ಪ್ರಾರಂಭಿಸಿದರು,

““ರಾಮ ಲಕ್ಷ್ಮಣ್ ಜಾನಕಿ, ಜೈ ಬೋಲೋ ಹನುಮಾನ್ ಕೀ, ಜಾನಕಿ ಶೋಧಕ ವಾನರ ಕೀ, ಜೈ ಬೋಲೋ ಹನುಮಾನ್ ಕೀ”. 

pinterest  ಚಿತ್ರಗಳಿಗೆ ಧನ್ಯವಾದಗಳು .

ಶನಿವಾರ, ಅಕ್ಟೋಬರ್ 10, 2020

ಅಂತಿಂತ ಗೊಲ್ಲ ಇವನಲ್ಲ,

 

ಗೋವ ಕಾಯುವನಲ್ಲ

ಗೋಪಿಯರ ಕಾಡುವ ನಲ್ಲ,

ಗೋವ ಕಾಯುವವರೆಲ್ಲ,

ಆಗುವರೇ ಇಂತ ಗೊಲ್ಲ?

 

ಸುರಿಸುತ ಬಾಯಲಿ ಜೊಲ್ಲ,

ಬೆಣ್ಣೆ ನಿತ್ಯ ಕದಿಯುತಿಹನಲ್ಲ,

ಯಶೋದೆಗೆ ಮುನಿಸು ಬರಲಿಲ್ಲ,

ಅಲ್ಲವೇ ಅವಳ ಮುದ್ದಿನ ನಲ್ಲ.


 

ಗೋಪಿಯರಿಗೆಲ್ಲ ಇವನೇ ನಲ್ಲ,

ಆದರೂ ಅವರ ಕೂಡಿದವನಲ್ಲ,

ರಾಧೆಯ ಬಿಡದೆ ಆಡಿಸಿದನಲ್ಲ,

ಕಡೆಗೂ ಅವಳ ವರಿಸಿದವನಲ್ಲ.

 

ರುಕ್ಮಿಣಿಯ ಅಪಹರಿಸಿದನಲ್ಲ,

ಸತ್ಯಭಾಮೆಯನು ಬಿಡಲೊಲ್ಲ,

ಜಾಂಬುವತಿಯನು ಪಡೆದನಲ್ಲ,

ಮೋಹಿನಿಯಾಗು ನಿಂತನಲ್ಲ.

 

ಧರ್ಮ ಎತ್ತಿ ಹಿಡಿದ ಮಲ್ಲ,

ಅಧರ್ಮಿಗಳ ಬಿಡಲಿಲ್ಲ,

ಸುಧಾಮನ ಮರೆತವನಲ್ಲ,

ಪ್ರೇಮದ ಬೀಜ ಬಿತ್ತಿಹನಲ್ಲ.

 

ಪಾರ್ಥ ಇಟ್ಟಿರಲು ಬಿಲ್ಲ,

ವಿರಾಟ ರೂಪ ತೋರಿಹನಲ್ಲ,

ಗೀತೆಯ ತಾ ಸಾರಿದನಲ್ಲ,

ಜಯದ ನಾಂದಿ ಹಾಡಿದನಲ್ಲ.

 

ಅಂತಿಂತ ಗೊಲ್ಲ ಇವನಲ್ಲ,

ಇವನಂತ ಗೊಲ್ಲ ಇನ್ನಿಲ್ಲ,

ಕೊಳಲನೂದುತ ಕುಳಿತಿಹನಲ್ಲ,

ಆಡಿಸುತ ನಾದದಿ ಈ ಜಗವನೆಲ್ಲ.


Acknowledge with thanks for photos .

krishnaart.tumblr.com , picclick.com, pinterest jpeg


ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...