ಮಂಗಳವಾರ, ಅಕ್ಟೋಬರ್ 22, 2024

ಬಿ. ಎಂ. ಶ್ರೀ. ಗೆ ಅರ್ಚನೆ

 

ಬಿ. ಎಂ. ಶ್ರೀ. ಗೆ ಅರ್ಚನೆ



ನವೋದಯದರಸನೆ, ನವ್ಯ ಸ್ಥಾಪಕನೆ

ಕನ್ನಡದ ಕಣ್ವನೆಂಬಿರುದು ಪಡೆದವನೆ

ಉಸಿರ ಕೊಸರಿರುವನಕ ಕನ್ನಡವನೆ

ನೆಡುವಂತೆ, ನುಡಿವಂತೆಸಗಿದವನೆ

ಹಳಸದೆ, ಕೊಳೆಸದೆ ಉಳಿಸೆಂದವನೆ

ಬಳಸಿ, ಬೆಳೆಸುವೆಂತೆಸಗಿದ ಧೀರನೆ

ಅಮರ ‘ಶ್ರೀ’ವರ್ಯ ಬೆಳ್ಳೂರ ಸುತನೆ

ನಿನ್ನ ಸ್ತುತಿಯ ತುಂಬಿಹ ಪುಷ್ಪಾರ್ಚನೆ

ಮುದದಿ  ಕನ್ನಡ ನುಡಿಯುತ ನಿತ್ಯಾರ್ಚನೆ

ಪುಷ್ಪಾರ್ಚನೆ ‘ಶ್ರೀವರ್ಯ’ ನಿನಗೆ ನಿತ್ಯಾರ್ಚನೆ.

ರಚನೆ: ಡಾ. ಪ್ರಭಾಕರ್ ಬೆಳವಾಡಿ     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಉಕ್ಕಿನ ಗೂಡಿನ ಮೌನ ಯೋಗಿ

  ಉಕ್ಕಿನ ಗೂಡಿನ ಮೌನ ಯೋಗಿ ನಗರವು ಮಲಗಿದೆ ಸುಖದ ಉಡಿಯಲಿ , ಹಳಿಗಳ ಮೇಲೆ ನಕ್ಷತ್ರದ ಹೊಳಪು , ಸಾವಿರ ಜೀವಗಳು ಕನಸಿನ ಕಡಲಲಿ , ಹೊದ್ದಿವೆ ಮೌನದ ಬೆಚ್ಚನೆಯ ಹೊದ...