ಮಂಗಳವಾರ, ಅಕ್ಟೋಬರ್ 22, 2024

ಬಿ. ಎಂ. ಶ್ರೀ. ಗೆ ಅರ್ಚನೆ

 

ಬಿ. ಎಂ. ಶ್ರೀ. ಗೆ ಅರ್ಚನೆ



ನವೋದಯದರಸನೆ, ನವ್ಯ ಸ್ಥಾಪಕನೆ

ಕನ್ನಡದ ಕಣ್ವನೆಂಬಿರುದು ಪಡೆದವನೆ

ಉಸಿರ ಕೊಸರಿರುವನಕ ಕನ್ನಡವನೆ

ನೆಡುವಂತೆ, ನುಡಿವಂತೆಸಗಿದವನೆ

ಹಳಸದೆ, ಕೊಳೆಸದೆ ಉಳಿಸೆಂದವನೆ

ಬಳಸಿ, ಬೆಳೆಸುವೆಂತೆಸಗಿದ ಧೀರನೆ

ಅಮರ ‘ಶ್ರೀ’ವರ್ಯ ಬೆಳ್ಳೂರ ಸುತನೆ

ನಿನ್ನ ಸ್ತುತಿಯ ತುಂಬಿಹ ಪುಷ್ಪಾರ್ಚನೆ

ಮುದದಿ  ಕನ್ನಡ ನುಡಿಯುತ ನಿತ್ಯಾರ್ಚನೆ

ಪುಷ್ಪಾರ್ಚನೆ ‘ಶ್ರೀವರ್ಯ’ ನಿನಗೆ ನಿತ್ಯಾರ್ಚನೆ.

ರಚನೆ: ಡಾ. ಪ್ರಭಾಕರ್ ಬೆಳವಾಡಿ     

ಭಾನುವಾರ, ಅಕ್ಟೋಬರ್ 20, 2024

ಮುಕ್ತಿ

 

ಮುಕ್ತಿ  

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ   

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪಾಪದ ಒಡಲಲ್ಲೇ, ಪಾಪಿಯ ಮಡಿಲಲ್ಲೇ

ಬೆಳೆದಿಹೆ ನಾನಮ್ಮ, ಬೆಳೆದಿಹೆ ನಾನಮ್ಮ

 

ಪಾಪದ ಚರ್ಮವ, ಭೂಪನ ಕರ್ಮವ

ಹೊತ್ತಿಹೇ ನಾನಮ್ಮ, ಹೊತ್ತಿಹೇ ನಾನಮ್ಮ

ಆರದ ದಾಹ, ಯಾರದೋ ಗೇಹ, ತೋರುವ ದೇಹ

ಹೊತ್ತಿಹೇ ನೋಡಮ್ಮ, ಹೊತ್ತಿಹೇ ನೋಡಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

 

ಕರ್ಮವ ಕಳಚಿ, ಧರ್ಮವ ಬಾಚಿ

ಬಾಳುವೆ ನಾನಮ್ಮ, ಬಾಳುವೆ ನಾನಮ್ಮ

 

ಕಾಮದ ಆಟ, ಆ ಹುಡುಗಾಟ

ಇನ್ನೂ ಮಾಸಿಲ್ಲ ಓಹ್ ಓಹ್ ಇನ್ನೂ ಮಾಸಿಲ್ಲ ಓಹ್

ಆತನ ಚಟಕೆ, ಹರಿದಿಹ ಪಟಕೆ,

ನಾನೇ ಬಲಿಯಮ್ಮ ನಾನೇ ಕುರುಹಮ್ಮ,

ಮರ್ಮವಿದೇನಮ್ಮ  ಕರ್ಮವಿದೇಕಮ್ಮ

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಜನಗಳ ನೋಟ, ನಿತ್ಯದ ಕಾಟ

ದಹಿಸುವುದೇಕೆ, ಸಹಿಸಲು ಬೇಕೇ

ನನ್ನಯ ತಪ್ಪೇನು, ನಾನಿದ ಒಪ್ಪೇನು

ಕರ್ಮವ ತಿರುಚಿ, ಚರ್ಮವ ಕಳಚಿ

ಬಾಳುವೆ ನಾನಮ್ಮ, ಜಗಕೆ ಹೇಳುವೆಯೇನಮ್ಮ

 

ಕೆಸರಿನ ಕಮಲ, ಆಗುವ ಚಪಲ

ಛಲವನು ತೋರುವ, ಶೃಂಗವನೇರುವ  

ಬಯಕೆಯ ಹರಸಿ, ಕಲ್ಮಶ ಸರಿಸಿ

ಮುಕ್ತಿಯ ನೀಡಮ್ಮ, ನಮಿಸುವೆ ನಾನಮ್ಮ.

 

ಪಾಪದ ಕೊಳದಲ್ಲೀ ಶಾಪದ ಸುಳಿಯಲ್ಲೀ  

ಬೆಂದಿಹೆ ನಾನಮ್ಮ, ಬೆಂದಿಹೆ ನಾನಮ್ಮ

ಪುಣ್ಯದ ಕಡಲಲ್ಲೀ ತೇಲಿಸು ನನ್ನಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮ

ಗಣ್ಯರ ಮಡಿಲಲ್ಲೀ ಕೂರಿಸು ಬಾರಮ್ಮಾ 

ಊರ ಕನ್ನಿಕೆ ಊರ ಬಯಕೆ

  ಊರ ಕನ್ನಿಕೆ ಊರ ಬಯಕೆ  ಡಾ ಬೆಳವಾಡಿ ಪ್ರಭಾಕರ್  ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು ಸೀರಿಯ ನೆರಿಗೆಯ ಮಿಂಚಿನ ...