ಹನಿಕವನಗಳು
ಲೀಲೆ
ಗಾಳಿಗೂ ಶಕ್ತಿ ಇದೆಯಂತೆ
ಜೇನಿನ ದಾಳಿಯ ತರವಂತೆ
ಘಮವನು ಹೂವು ತೋರಿಸದು
ಮೂಗಿಗೆ ಸುಮವು ಸೂಸುವುದು
ಮಳೆ ನೀರು
ಮೆಟ್ಟಲ ಮೇಲೆ ಬೀಳುತ್ತಿತ್ತು
ಮುತ್ತಿನ ಮಣಿಗಳ ತರವಿತ್ತು
ಬಿದ್ದರು ತಾನೇ ನಲಿದಿತ್ತು
ಮುತ್ತಿನ ರೂಪ ತಾಳಿತ್ತು
ರಚನೆ: ಡಾ. ಬೆಳವಾಡಿ ಪ್ರಭಾಕರ್
ಚಿಟ್ಟೆ ಚಿಟ್ಟೆ
ಬೆರಳಿನ ಮುಂದೆ
ಗೋಲಿಯು ಇತ್ತು
ನನ್ನಯ ಗಮನ ಗುರಿಯ
ಮೇಲಿತ್ತು
ಎದುರಿಗೆ ಇದ್ದವು
ಹಲವಾರು ಗೋಲಿ
ನನಗೆ ಬೇಕಿತ್ತು ಆ ಬಣ್ಣದ
ಗೋಲಿ
ಬೆರಳನು ಬಾಗಿಸಿ
ರೊಯ್ಯನೆ ಬಿಟ್ಟೆ
ಹಾರುತ ಬಂದಿತು
ಬಣ್ಣದ ಚಿಟ್ಟೆ
ಗೋಲಿಯ ರಭಸಕೆ ತಗುಲಿತು
ರೆಕ್ಕೆ
ಅಳುತಲಿ ನಿಂದೆ
ದುಃಖವು ಉಕ್ಕೆ
ತಿಳಿಯದೆ ಆಯಿತೆ ಚಿಟ್ಟೆಗೆ
ಪೆಟ್ಟು
ಕ್ಷಣದಲಿ ಕಂಡೆನು
ಚಿಟ್ಟೆಯ ಗುಟ್ಟು
ಬಿದ್ದಿಹ ಚಿಟ್ಟೆ ನೋಡದೋ
ಪಕ್ಕ
ನೋಡಲು ಹೋದರೆ ಹಾರಿತೆ ಠಕ್ಕ!
ರಚನೆ: ಡಾ. ಬೆಳವಾಡಿ ಪ್ರಭಾಕರ್
this photo courtesy PINTEREST
ಎಲ್ಲಿ ಹೋದೆ ಮುದುಕಿ
ನಿತ್ಯ ನೇಮದಿ ಬರುವಾಕಿನೊಂದ ಹಸುಳೆಯ ಅಳಲು
ಪಲ್ಲವಿ
ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ
ಚರಣಂ 1
ಪಾಂಡಿತ್ಯ ನಿಪುಣ ನೀ ಶಿಕ್ಷಕ, ಮೈಮನಮುಟ್ಟುವ ಪಾಠದ ಶಿಕ್ಷಕ
ಬಲು ಸಂಭ್ರಮದಿ ಬಂದಿಹೆ ಶಿಕ್ಷಕ, ವಿಧ್ಯೆ ಪ್ರಧಾಯಿಸೆನಗೆ
ಓ ಶಿಕ್ಷಕ
ಚರಣಂ 2
ಜೀವಶಾಸ್ತ್ರವ ಕಲಿಸುವೆನೆಂದೆ, ಅದ ಬಣ್ಣಿಸಲು ಬತ್ತಲೆಯಾಗೆಂದೆ
ಮುಟ್ಟಲು ನೀ ನನ್ನಂಗಾಗಗಳ ಒಂದೊಂದೆ, ಪುಳಕಿತಳಾಗಿ ನಾನಿಂದೆ
ಚರಣ 3
ಇದು ಪಾಠದ ನೆಪದ ಆಟವೋ, ನಿನ್ನ ದಾಹಕೆ ಸಹಪಾಟವೋ
ನನ್ನಂಗದಿ ಆಡಿದ ಚೆಲ್ಲಾಟವೋ, ನರಿಯೊಬ್ಬನ ನನ್ನೊಡನಾಟವೋ
ಚರಣ 4
ಅಭಯ ಹಸ್ತದ ರಕ್ಷೆಯನಿಟ್ಟೆ, ಅಳಿಸಲಾಗದ ಶಿಕ್ಷೆಯ ಕೊಟ್ಟೆ
ಶಿಕ್ಷಕ ನೀನೆಂದು ನಂಬಿದೆ, ಘೋರ ಭಕ್ಷಕನಾಗಿ ನೀನಿಂದು ನಿಂದೆ
ಮಂಗಳ
ಗುರವೇ ದೇವ, ಗುರವೇ ವೈಭವ, ಗುರುಗಳೇ ಜಗದ ಜೀವ,
ಶಿಕ್ಷಕರೇ ನೀವ್ ಭಕ್ಷಕರಾಗದೆ, ನಂಬಿದ ಹಸುಳೆಗೆ ನೀಡುವ ಅಭವ.
ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ
ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ
ಶಿಕ್ಷಕ ನಾ ನಿನ್ನ ನಂಬಿದೆ, ಜ್ಞಾನ ಜ್ಯೋತಿಯೆಂದೇ ನಾ ನಂಬಿದೆ
ರಚನೆ: ಡಾ. ಪ್ರಭಾಕರ್ ಬೆಲವಾಡಿ
ಉತ್ತರಹಳ್ಳಿ, ಸಂ: 94 48 48 89 10
ಮುರಳಿ ನಾದ ಸುರಳಿ (ಅಷ್ಟಪದಿ) (ಆದ್ಯಂತ ಪ್ರಾಸ ಸಮಮಾತ್ರೆ)
ಅರಳಿ ಮರವನೇರಿ, ಕುಳಿತ ನೋಡು ನಮ್ಮ ಮುರಳಿ
ಮುರಳಿ ತನ್ನ ಲಹರಿಯಲ್ಲಿ, ನುಡಿಸುತಿದ್ದ ಮುರಳಿ
ಅರಳಿ ಮರದ ಎಲೆಗಳೆಲ್ಲ, ಕುಣಿಯುತಿತ್ತು ಅರಳಿ
ಮುರಳಿ ನಾದ ತೇಲುತಿರಲು, ರಾಧೆ ಮನವು ಅರಳಿ
ಮುರಳಿನಾದ ಸೆಳೆಯುತಿರಲು, ರಾಧೆ ಪಾದ ತೆರಳಿ
ಮುರಳಿ ನುಡಿಸುತಿದ್ದ ಮುರಳಿ, ರಾಧೆಯತ್ತ ಹೊರಳಿ
ಅರಳಿ ಮುರಳಿ ಕೊಟ್ಟ, ಪ್ರೀತಿಯೆಂಬ ನಾದಸುರಳಿ
ಮರಳಿ ಮುದದಿ ನೆನೆದಿರುವಳು, ಮನದಿ ರಾಧೆ ಅರಳಿ.
ರಚನೆ: ಡಾ.ಪ್ರಭಾಕರ್ ಬೆಲವಾಡಿ
ಊರ ಕನ್ನಿಕೆ ಊರ ಬಯಕೆ ಡಾ ಬೆಳವಾಡಿ ಪ್ರಭಾಕರ್ ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು ಸೀರಿಯ ನೆರಿಗೆಯ ಮಿಂಚಿನ ...