ಬುಧವಾರ, ಸೆಪ್ಟೆಂಬರ್ 30, 2020

ಗಡಿಗೆಯ ಅಡಿಗೆ ಮತ್ತೊಂದು

 



ಓ ಆದಿ ಶಂಕರಾಚಾರ್ಯರೇ...

ಓ ಆದಿ ಶಂಕರಾಚಾರ್ಯ

ಧರ್ಮ ಸಂಸ್ಥಾಪನಾರ್ಥಾಯ

ಸಂಭವಾಮಿ ಯುಗೇ ಯುಗೇ

 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ.... 1

                                                     

ತುಂಗಾ ತಟದ ಶೃಂಗ ಗಿರಿಯಲಿ

ಬದರಿ ಕೇದಾರದ ಹಿಮ ಗರ್ಭದಲಿ

ಜಗನ್ನಾಥನ ಪುರಿಯ ದ್ವಾರದಿ

ದ್ವಾರಕಾ ನಗರದ ಸುಂದರ ತಾಣದಿ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  6  

 

ಮಲ್ಲಿಗೆ ಹೂವು ಸುಮ ತರುವಂತೆ

ಕಾದ ಬೆಣ್ಣೆಯ ಘಮ ಬರುವಂತೆ

ವಸಂತ ಋತುವಿನ ಚಿಗುರಿನೆಲೆಯಂತೆ 

ಆಧ್ಯಾತ್ಮದ ಭಾವ ಚಿಮ್ಮುತ ಬನ್ನೀರಿ    

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  2

 

ಹಿಂದೂ ಧರ್ಮದ ಸಾರವ ಬೀರುತ

ಜಗಕೆ ಮುಕ್ತಿಯ ದ್ವಾರವ ತೋರುತ

ದಂಡವ ಪಿಡಿದು ಅಖಂಡ ಸುತ್ತುತ

ದಿನಕರ ಕೋಟಿ ತೇಜದಿ ಹೊಳೆಯುತ 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  7  

 

ಅತ್ತಿತ್ತಲುಗದೆ ಭಕ್ತರ ಮನದಲಿ

ನಿತ್ಯ ನಿರಂತರ ಸೂಕ್ತದ ವನದಲಿ

ಶಕ್ತಿಯೇ ತುಂಬಿಹ ನಿಮ್ಮಯ ಪದದಲಿ

ಸ್ತೋತ್ರ ಸಾಗರ ಹರಿಸುತ ಮುದದಲಿ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  3

 

ಕನಕಧಾರೆಯ ಬರೆಯುತ ಬನ್ನಿ

ಮನಕೆ ಮುದವನು ನೀಡಲು ಬನ್ನಿ

ಪಂಚಕಾಷ್ಟಕ ಶತಕಾಷ್ಟಕ ತನ್ನಿ

ಉಪನಿಷತ್ತುಗಳ ಸಾರವ ಪೇಳುತ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  8  

 

ಹೆಜ್ಜೆಯ ಮೇಲೊಂದ ಹೆಜ್ಜೆಯನಿಕ್ಕುತ

ಧರ್ಮದ ಗೆಜ್ಜೆಯ ನಾದವ ತೋರುತ

ಕಾಲಟಿಯಿಂದ ಕೇದಾರ ಸಾಗುತ

ಭವ್ಯ ಭಾರತವನೇ ಚಲಿಸುತ ಮೆರೆಯುತ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  4

 

ವಿಷ್ಣು ಲಲಿತೆಯರ ಸಹಸ್ರ ನಮಿಸಿ

ಸಂಖ್ಯೆಯಿಲ್ಲದ ಗ್ರಂಥವ ರಚಿಸಿ

ಶ್ರದ್ಧಾ ಭಕ್ತಿಯ ಸಾಗರ ಹರಿಸಿ

ಚೊಕ್ಕ ಭಕ್ತರ ನಿತ್ಯವೂ ಹರಸಲು 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....   9

 

ವಾದಿ ವಾದಗಳ ಮೆಟ್ಟಿ ನಿಲ್ಲುತ

ಅಧ್ವೈತ ವಾದದ ಗಟ್ಟಿಯ ತೋರುತ

ಪಂಡಿತೋತ್ತಮರ ದಿಘ್ಬ್ರಮೆಗೊಳಿಸುತ

ಸರ್ವಜ್ಞ ಪೀಠದ ಮೆಟ್ಟಿಲನೇರುತ

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  5

 

ಓ ಆದಿ ಶಂಕರಾಚಾರ್ಯ

ಧರ್ಮ ಸಂರಕ್ಷಣಾರ್ಥಾಯ

ಸಂಭವಾಮಿ ಯುಗೇ ಯುಗೇ

 

ಆದಿಗುರು ಶಂಕರಾಚಾರ್ಯರೆ ಬನ್ನೀರಿ

ಭವ ಭಯ ನೀಗುವ ಭಗವತ್ಪಾದರೆ ಬನ್ನೀರಿ....  10  

 

ಇತಿ ಡಾ.ಪ್ರಭಾಕರ ವಿರಚಿತಆದಿಗುರು ಶಂಕರಾಚಾರ್ಯದಶಕಮಿದಂ ಲೋಕ ಸಮರ್ಪಣಂ. ಯಃ ಪಠೇಥ್ ನಿತ್ಯಂ, ಲಭತಿ ಸಕಲ ಸೌಭಾಗ್ಯಂ, ಶೃಣುಯಾತ್ ಖಚಿತಂ ನಿತ್ಯಾನಂದಂ, ಲಿಖಿತಂ ದಿವ್ಯ ನ್ನಿಧಿಂ.

 

ರಚನೆ: ಡಾ. ಪ್ರಭಾಕರ್ ಬೆಲವಾಡಿ

11, ಚಿರಂಜೀವಿ, ಲಕ್ಕಣ್ಣ ಬಡಾವಣೆ, ಸುಬ್ರಮಣ್ಯಪುರ ರಸ್ತೆ, ಉತ್ತರಹಳ್ಳಿ, ಬೆಂಗಳೂರು 560001

ಸಂ: 94484 88910   ಇಮೇಲ್: prabhakarbelavadi@gmail.com 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...