ಸವಿರುಚಿ 1
ಪ್ರಭಾತೇ ಕರ ದರ್ಶನಂ
ಸಾಮಾನ್ಯವಾಗಿ ಎದ್ದ
ತಕ್ಷಣ ನಾವು ಹೀಗೆ ಶ್ಲೋಕವನ್ನು ಹೇಳಿಕೊಂಡು ನಮ್ಮ ಕೈಗಳನ್ನು
ನೋಡಿಕೊಳ್ಳುವುದು ರೂಢಿಯಲ್ಲಿದೆ.
"ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೇ ಸರಸ್ವತೀ, ಕರ ಮೂಲೇ ಸ್ತಿಥೇ ಗೌರೀ, ಪ್ರಭಾತೇ ಕರ ದರ್ಶನಂ."
ಹೀಗೂ ಹೇಳಿಕೊಳ್ಳಬಹುದಲ್ಲವೆ? ಒಮ್ಮೆ ಅಂದುಕೊಂಡು ನೋಡಿ.
"ಕರಾಗ್ರೇ ವಸತೇ ಬ್ರಹ್ಮ, ಕರ ಮಧ್ಯೇ ಮಹಾ ವಿಷ್ನುಃ, ಕರ ಮೂಲೇ ಸ್ತಿಥೇ ಮಹೇಶ್ವರಃ,
ಕರ ಪೂರ್ಣಂ ಪರಬ್ರಹ್ಮಃ, ಪ್ರಭಾತೇ ಪವಿತ್ರ ಕರ ದರ್ಶನಂ."
********************************************************************
ಸವಿರುಚಿ 2
ಅನಿಸುತಿದೆ ಏಕೋ ಇಂದು
ಅನಿಸುತಿದೆ ಏಕೋ ಇಂದು ಎಲ್ಲವೂ ವೈರಸ್ ಎಂದು,
ಪ್ರೇತದ ಲೋಕದಿಂದ ಕೊಲ್ಲಲೇ ಬಂದವಳೆಂದು
ಕೊಂಚ ದೂರ ನಿಲ್ಲು ನಲ್ಲೆ ಹಾಗೇ ಸುಮ್ಮನೇ.
ಅನಿಸುತಿದೆ ಏಕೋ ಇಂದು ಗಂಟಲು ಕೆರೆದಿದೆಯೆಂದು
ಆಗುತಿತ್ತು ಹೀಗೇ ಹಿಂದೂ ಹೋಗುತಿತ್ತು ಬಂದು ಬಂದು
ಆಹಾ ಏಕೋ ಏನೋ ಇಂದು ದುರುಳ ಈ ಯೋಚನೇ.
ಅನಿಸುತಿದೆ ಏಕೋ ಇಂದು ಮೂಗು ಸೋರುತಿಹುದು ಎಂದು
ಬಾಲ್ಯದಿಂದಲೂ ಹರಿಯುತಿತ್ತು ಸುಮ್ಮನಿದ್ದೆ ಸೀತವೆಂದು
ಆಹಾ ಏಕೋ ಏನೋ ಇಂದು ಮರುಳ ಈ ವೇದನೇ
ಅನಿಸುತಿದೆ ಏಕೋ ಇಂದು ಮೈಯೆಲ್ಲಾ ಕಾದಿದೆಯೆಂದು
ಕಷಾಯವನ್ನೇ ಅಜ್ಜಿ ಕೊಟ್ಟಳಂದು ಕುಡಿಯಲೆಂದು
ಆಹಾ ಏಕೋ ಏನೋ ಇಂದು ಈ ಕರುಳ ಯಾತನೇ.
ಅನಿಸುತಿದೆ ಏಕೋ ಇಂದು ಹೊಸ್ತಿಲ ದಾಟೆನೆಂದು
ಆಟ, ಪಾಠ, ಬಂದು, ಬಳಗ, ಕೂಟ, ನೋಟ ಬೇಡವೆಂದು
ಆಹಾ ಹೋಯ್ತು ವೈರಸ್ ನೋಡು, ಅಲ್ಲವೆಂದು ನಮ್ಮನೇ.
ಅನಿಸುತಿದೆ ಏಕೋ ಇಂದು ನೀ ನನ್ನ ಕೆಣಕ ಬಂದಿಹೆಯೆಂದು
ಮರೆತಿಹೆಯಾ ನೀನು ಈ ದೇಶ ಒಂದು ಗರ್ಭಗುಡಿಯೆಂದು
ಆಹಾ ತೊಲಗು ಬೇಗ ಬಿಟ್ಟು ನಿನ್ನ, ಈ ದುರಾಲೋಚನೇ.
ಅನಿಸುತಿದೆ ನೀನು ಇಂದು ತುಂಬಾ ಸೀರಿಯಸ್ ಎಂದು
ಚೀನಾವೆಂಬ ದೇಶದಿಂದ ಜಾರಿ ತೂರಿ ಬಂದಿಹೆಯೆಂದು
ಆಹಾ ಹಾಗೇ ಹಾರಿ ಹೋಗು ಕಾಣದಂತೆ ಗುಮ್ಮನೇ.
ಅನಿಸುತಿದೆ ಏಕೋ ಇಂದು ಮನೆಯೇ ಮಂತ್ರಾಲಯವೆಂದು
ಅಪ್ಪ, ಅಮ್ಮ, ಬಂಧು ಬಳಗ ಈ ಬಾಳಿಗೆ ಆಸರೆಯೆಂದು
ಆಹಾ ಪ್ರೀತಿ ಪ್ರೇಮ ಒಲವು ನಲಿವು ಎಂಥಾ ಮಧುರ ಭಾವನೇ.
ಅನಿಸುತಿದೆ ಏಕೋ ಇಂದು ಕೊರೋನ ರಾಮ ಬಾಣವೆಂದು
ನಸು ನಗುತಾ ನಿಂತಿಹ ನೋಡು ದೇವ ತಾನೇ ಭುವಿಗೆ ಬಂದು
ಆಹಾ ಬಂದು ಸನಿಹ ನಿಲ್ಲು ನಲ್ಲೆ ಬಳಸಿ ಹಾಗೇ ಬೆಚ್ಚನೇ.
ರಚನೆ:
🙏🙏🙏🙏🙏🙏
ಡಾ. ಪ್ರಭಾಕರ ಬೆಲವಾಡಿ, ನಿವೃತ್ತ ಪ್ರಾಧ್ಯಾಪಕರು,
11, ಚಿರಂಜೀವಿ, ವಾಸವಿ ಗುಡಿ ರಸ್ತೆ, ಸುಬ್ರಹ್ಮಣ್ಯಪುರ ಅಂಚೆ,
ಉತ್ತರಹಳ್ಳಿ, ಬೆಂಗಳೂರು 560061.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ